ಬೆಲ್ಲದ ಮನೆಯಲ್ಲಿ ಸಿಎಂ ಕಾಫಿ,ತಿಂಡಿ

ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ಚರ್ಚೆ ಜೋರಾಗಿರುವಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿರುವುದು ರಾಜಕೀಯ ವಲಯದಲ್ಲಿ ತುಂಬಾ ಆಶ್ಚರ್ಯವನ್ನು ಉಂಟು ಮಾಡಿದೆ. ಒಂದು ಸಮಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಠಿಣ ಪೈಪೋಟಿ ನೀಡಿದ್ದ ಬೆಲ್ಲದ ಅವರಿಗೆ ಹೈಕಮಾಂಡ್ ಕೃಪೆ ಒಲಿದಿರಲಿಲ್ಲ. ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬೊಮ್ಮಾಯಿ ಆಯ್ಕೆಯಾಗಿದ್ದರು. ಆ ಬಳಿಕ ಸಚಿವ ಸಂಪುಟದಲ್ಲಿ ಬೆಲ್ಲದ ಅವರಿಗೆ ಅವಕಾಶ ನಿರಾಕರಣೆಯಾಗಿತ್ತು. ಈಗ ಮತ್ತೆ ಸಚಿವ ಸಂಪುಟ ಪುನರಾಚನೆ ಆಗಬೇಕು ಎನ್ನುವ ಗುಸುಗುಸು ಹಬ್ಬಿರುವಾಗ ಬೊಮ್ಮಾಯಿ ಅವರು ಬೆಲ್ಲದ ಮನೆಯಲ್ಲಿ ಉಪಹಾರ ಸೇವಿಸಿ ರಾಜಕೀಯ ಪಂಡಿತರಲ್ಲಿ ಸುದ್ದಿಗೆ ಕಾರಣರಾಗಿದ್ದಾರೆ.

Leave a Reply