ಪ್ರಮೋದ್ ರಾಜೀನಾಮೆ ಗೊತ್ತಿತ್ತು: ಡಿಕೆಶಿ

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಡುವ ವಿಷಯ ಆರು ತಿಂಗಳ ಮೊದಲೇ ಗೊತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಪ್ರಮೋದ್ ತಮ್ಮ ಬಳಿ ದು:ಖ, ದುಗುಡ ತೋಡಿಕೊಂಡಿದ್ದರು ಎಂದು ಹೇಳಿದ ಡಿಕೆಶಿ ಅವರಿಗೆ ಎಂಎಲ್ ಸಿ ಮಾಡುವ ಬಗ್ಗೆ ಬಿಜೆಪಿ ಭರವಸೆ ನೀಡಿದೆಯಂತೆ ಎಂದು ತಮ್ಮಲ್ಲಿರುವ ಮಾಹಿತಿಯನ್ನು ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆಗೊಳ್ಳುವ ಕುರಿತು ಮಧ್ವರಾಜ್ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತನಾಡಿರುವುದು ಈ ಮೊದಲೇ ತಮಗೆ ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Leave a Reply