ಪಡುಬಿದ್ರಿ ತೋಡು ಮುಚ್ಚಿ ಕಾಮಗಾರಿ: ಕಾಮಗಾರಿಗೆ ತಡೆ

ಮಳೆಗಾಲದಲ್ಲಿ ನೀರು ಹೋಗುವ ತೋಡನ್ನು ಮುಚ್ಚಿ ಕಾಮಗಾರಿ ನಡೆಸುತ್ತಿದ್ದ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ ಅಧಿಕಾರಿಗಳನ್ನು ಪಡುಬಿದ್ರಿ ಗ್ರಾಮ ಪಂಚಾಯಿತಿ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಹೆದ್ದಾರಿ ೬೬ರ ಸರ್ವೀಸ್ ರಸ್ತೆಯ ನಾರಾಯಣ ಗುರು ಸಭಾಗೃಹದ ಬಳಿಯ ಖಾಸಗಿ ಜಾಗದ ಸನಿಹದಲ್ಲಿ ಪಾದಾಚಾರಿ ನಡದಾಡಲು ಪುಟ್‌ಪಾತ್ ನಿರ್ಮಿಸಲು ನವಯುಗ ಕಂಪೆನಿ ಮುಂದಾಗಿತ್ತು.

ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಪಂಚಾಯಿತಿ ಸದಸ್ಯ ನವೀನ್ ಎನ್. ಶೆಟ್ಟಿ, ಪಿಡಿಓ ಪಂಚಾಕ್ಷರಿ ಕೇರಿಮಠ್, ಕಾರ್ಯದರ್ಶಿ ರೂಪಲತಾ, ಸ್ಥಳೀಯರಾದ ಮಾಧವ ಶೆಟ್ಟಿ ಹಾಜರಿದ್ದರು.

Leave a Reply