ದುರ್ಗಾ ದೌಡ್ ಆಯೋಜಕರ ವಿರುದ್ಧ ಕಾನೂನು ಕ್ರಮ – ಜಿಲ್ಲಾಧಿಕಾರಿ ಕೂರ್ಮ ರಾವ್

ಉಡುಪಿ, ಅ.21: : ಉಡುಪಿಯಲ್ಲಿ ನಡೆದಿದ್ದ ದುರ್ಗಾ ದೌಡ್ ಆಯೋಜಕರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದ್ದಾರೆ.

ದುರ್ಗಾ ದೌಡ್ ಕಾರ‍್ಯಕ್ರಮ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ಕಾನೂನು ರೀತಿಯಲ್ಲಿ ಅದರ ತನಿಖೆ ನಡೆಯಲಿದೆ. ಅದಕ್ಕೆ ಅದರದ್ದೇ ಆದ ಪ್ರೊಸೀಜರ್ ಇದೆ ಎಂದರು. ಅನುಮತಿ ಇಲ್ಲದ ಕಾರ‍್ಯಕ್ರಮದಲ್ಲಿ ಸಚಿವರು ,ಶಾಸಕರೇ ಭಾಗವಹಿಸಿದ್ದಾರಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಸಿ, ದೂರು ದಾಖಲಾದ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಆಗಲಿದೆ ಎಂದು ಹೇಳಿ ನುಣುಚಿಕೊಂಡರು. ಉಳಿದಂತೆ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕಾರ್ಯ ಮುಂದುವರಿದಿದೆ. ಜನರು ಜಾಗೃತರಾಗಿರುವುದರ ಜೊತೆಗೆ ಧೈರ್ಯವಾಗಿರಬೇಕು ಎಂದು ಹೇಳಿದರು.

Leave a Reply