BSY ಹೇಳಿದ ಮಗನ ಹೆಸರಿನ ಕಥೆ!

ನನ್ನ ಮಗ ರಾಘವೇಂದ್ರ ಹುಟ್ಟುವ ಮುಂಚೆ ರಾಯರು ನನ್ನ ಸ್ವಷ್ನದಲ್ಲಿ ಬಂದು ಆರ್ಶೀವಾದ ಮಾಡಿದರು. ಪರಿಣಾಮ ಮೊದಲ ಮೂರು ಹೆಣ್ಣುಮಕ್ಕಳ ನಂತರ ಹುಟ್ಟಿದವನಿಗೆ ರಾಘವೇಂದ್ರ ಎಂದು ಹೆಸರನ್ನು ಇಟ್ಟೆ ಎಂದು ಯಡಿಯೂರಪ್ಪನವರು ತಮ್ಮ ಹಿರಿಯ ಮಗನ ಹೆಸರಿನ ವೃತ್ತಾಂತವನ್ನು ಸ್ಮರಿಸಿದರು. ಅವರು ಕರ್ನಾಟಕದ ದ್ವಿತೀಯ ಮೃತ್ತಿಕಾ ಬೃಂದಾವನವೆಂದು ಪ್ರಸಿದ್ಧಿ ಹೊಂದಿರುವ ಶಿಕಾರಿಪುರ ತಾಲೂಕಿನ ಉಡಗಣಿ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನ, ಮುಖ್ಯಪ್ರಾಣ ದೇವರು ಹಾಗೂ ಚೆನ್ನಕೇಶವ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

Leave a Reply