ಶ್ರೀರಂಗಪಟ್ಟಣದ ಮೂಡಲಬಾಗಿಲು ಶ್ರೀ ಆಂಜನೇಯ ದೇವಸ್ಥಾನವನ್ನು ಟಿಪ್ಪು ಧ್ವಂಸಗೊಳಿಸಿದ ಎಂಬುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ವಿಚಾರಮಂಚ್ ವೇದಿಕೆ ಪುರಾತತ್ವ ಇಲಾಖೆಗೆ ಸಂಬಂಧಿಸಿದ ದಾಖಲೆಯೊಂದನ್ನು ಬಿಡುಗಡೆ ಮಾಡಿದೆ. ಇದು ಕಾನೂನು ಹೋರಾಟದ ಸಿದ್ಧತೆಯಲ್ಲಿರುವ ಹಿಂದೂಪರ ಸಂಘಟನೆಗಳಿಗೆ ಪ್ರಬಲ ಅಸ್ತ್ರ ದೊರಕಿದಂತಾಗಿದೆ.
60 ವರ್ಷಗಳ ಹಿಂದೆ ಸಂಸ್ಕೃತ ವಿದ್ವಾನ್ ಬಾಲಗಣಪತಿ ಭಟ್ಟ ಬರೆದಿದ್ದ ಪೂರ್ವದ್ವಾರಂಜನೇಯಸ್ವಾಮಿ ಸುಪ್ರಭಾತಂ ಪುಸ್ತಕದಲ್ಲಿ ಟಿಪ್ಪು ಮೂಡಲಬಾಗಿಲು ಆಂಜನೇಯ ದೇಗುಲ ಕೆಡವಿದ್ದ ಎಂದು ಉಲ್ಲೇಖಿಸಲಾಗಿತ್ತು.