ಮಾರ್ಚ್ 22 ರಂದು ಸುರತ್ಕಲ್ ಟೋಲ್ ತೆರವಿಗೆ ಪಾದಯಾತ್ರೆ ; ಮುನೀರ್ ಕಾಟಿಪಳ್ಳ

ಎನ್ಐಟಿಕೆ ಸುರತ್ಕಲ್ ನಲ್ಲಿ ಅವೈಜ್ಞಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ಟೋಲ್ ಗೇಟ್ ತೆರವಿಗೆ ಆಗ್ರಹಿಸಿದ್ದ ಟೋಲ್ ಗೇಟ್ ಚಲೋ ಪಾದಯಾತ್ರೆ ಮಾರ್ಚ್ 22ರಂದು ನಡೆಯಲಿದೆ ಎಂದು ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನಿರ್ ಕಾಟಿಪಳ್ಳರವರು ಮಂಗಳವಾರ ಹೆಜಮಾಡಿ ಟೋಲ್ ಗೇಟ್ ಬಳಿ ಹೇಳಿದ್ದಾರೆ.

ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಉಡುಪಿಯದ್ಯಾಂತ ೧೪೪ ಸೆಕ್ಷನ್ ಜಾರಿ ಇದ್ದುದರಿಂದ ಪಾದಯಾತ್ರೆಯನ್ನು ಮಾರ್ಚ್ 15ರ ಮಂಗಳವಾರ ದಿಂದ ಮಾರ್ಚ್ 22 ರವರೆಗೆ ಮುಂದೂಡಲಾಗಿದೆ. ಆ ಹಿನ್ನೆಲೆಯಲ್ಲಿ ಮಂಗಳವಾರ ಹೆಜಮಾಡಿಯಲ್ಲಿ ನಡೆದ ಮುಖಂಡರೊಂದಿಗಿನ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಮಾಲೋಚನಾ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಮೊಯ್ದಿನ್ ಬಾವ, ಹರೀಶ್ ಪುತ್ರನ್, ನ್ಯಾಯವಾದಿ ದಿನೇಶ್ ಉಳೆಪಾಡಿ, ಸುಧಾಕರ್ ಕಾರ್ಕಳ, ರಮೇಶ್ ಕೋಟ್ಯಾನ್, ಹರಿಕೃಷ್ಣ ಪುನರೂರು, ಶೇಖರ ಹೆಜಮಾಡಿ , ನವೀನ್ ಚಂದ್ರ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply