ಡಾ.ಎಂ.ಮೋಹನ ಆಳ್ವಾ ಅವರಿಗೆ ‘ವಿದ್ಯಾಕಲಾ ಸಾಮ್ರಾಟ್’ ಪ್ರಶಸ್ತಿ

ಮೂಲ್ಕಿಯ ಮಯೂರಿ ಫೌಂಡೇಶನ್ ನೀಡುವಂತಹ ‘ವಿದ್ಯಾ ಕಲಾ ಸಾಮ್ರಾಟ್’ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರಿಗೆ ಪ್ರಧಾನ ಮಾಡಲಾಯಿತು.
ಮಯೂರಿ ಫೌಂಡೇಷನ್ ಇತ್ತೀಚಿಗೆ ಮೂಲ್ಕಿಯಲ್ಲಿ ಹಮ್ಮಿಕೊಂಡಿದ್ದ ಸಾಮ್ರಾಟ್ ಅಶೋಕ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲು ಉದ್ದೇಶಿಸಲಾಗಿತ್ತು, ಆದರೆ ಅಂದು ಮೋಹನ ಆಳ್ವಾ ಅವರು ಹೊರ ರಾಜ್ಯದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಹೊಂಡಿದ್ದ ಕಾರಣ ಅವರಿಗೆ ಅಂದಿನ ಮೂಲ್ಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ , ಈ ಹಿನ್ನೆಲೆಯಲ್ಲಿ ಮೋಹನ ಆಳ್ವಾ ಅವರ ಮೂಡಬಿದಿರೆಯ ನಿವಾಸದಲ್ಲಿ ಶುಕ್ರವಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮಯೂರಿ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷ ಜಯ ಕೆ.ಶೆಟ್ಟಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಮಯೂರಿ ಫೌಂಡೇಶನ್ ಕಾರ್ಯದರ್ಶಿ ರಾಜೇಶ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪ್ರಮೋದ್ ಕುಡ್ವ, ಉಡುಪಿ ಅಮೆಚೂರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಅಡ್ಯಂತಾಯ ನಿಟ್ಟೆ ಉಪಸ್ಥಿತರಿದ್ದರು.

Leave a Reply