ಅಂಧ ವಿದ್ಯಾರ್ಥಿನಿಯ ಸಾಧನೆಗೆ ಮೋದಿ ಫಿದಾ!

ಉತ್ತರಾಖಂಡ ಮೂಲದವಳಾದರೂ ಮೈಸೂರಿನಲ್ಲಿ 3 ತಿಂಗಳಲ್ಲಿ ಕನ್ನಡ ಕಲಿತು, ಕನ್ನಡದಲ್ಲೇ 10 ನೇ ತರಗತಿ ಪರೀಕ್ಷೆ ಬರೆದು ಪಾಸು ಮಾಡಿದ ಕಲ್ಪನಾ ಎಂಬ ಅಂಧ ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಈಕೆಯ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದಿರುವ ಅವರು ಆಕೆಗೆ ಕನ್ನಡ ಕಲಿಸಿದ ಮೈಸೂರಿನ ಶಿಕ್ಷಕರಾದ ತಾರಾಮೂರ್ತಿಯವರನ್ನು ಕೂಡ ಶ್ಲಾಘಿಸಿದ್ದಾರೆ. ಕನ್ನಡದವರಾಗಿದ್ದರೂ ಇಂಗ್ಲೀಷ್ ಮಾತನಾಡುವವರು ಹೆಚ್ಚಾಗಿರುವವರ ನಡುವೆ ಕಲ್ಪನಾ ಮಾದರಿಯಾಗಿ ನಿಲ್ಲುತ್ತಾರೆ.

Leave a Reply